0 Shares

ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ಕುರಿತು ಚರ್ಚಿಸಲು ಕೂಡಲೇ ಸರ್ವ ಪಕ್ಷಗಳಸಭೆ ಮತ್ತು ದಲಿತ ಮುಖಂಡರ ಸಭೆ ಕರೆಯುವಂತೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಕಾಂಗ್ರೆಸ್ ಉದ್ದೇಶ ಒಡೆದು ಆಳುವ ನೀತಿಯಾಗಿದೆ. ಇದು ಸಾಮಾಜಿಕ ನ್ಯಾಯದ ಸರ್ಕಾರವಲ್ಲ. ಕೆಲವೇ ಕೆಲವು ಜಾತಿಗಳ ಬೆನ್ನ ಹಿಂದೆ ನಿಂತ ಸರ್ಕಾರ.ಸರ್ಕಾರದ ಕೃಪಾಪೋಷಿತರು 56 ರಷ್ಟು ಮೀಸಲಾತಿ ವಿರುದ್ಧ ಹೋಗಿದ್ದರು, ಅದರ ವಿರುದ್ಧ ಸರ್ಕಾರ ಸಮರ್ಥವಾಗಿ ವಾದ ಮಂಡಿಸಿದ್ದರೆ ಇಂದು ಮತ್ತೆ ನೆನೆಗುದಿಗೆ ಬೀಳುತ್ತಿರಲಿಲ್ಲ.

6432 ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಲು ಹೊರಟಿದೆ, ಅದು 17 ಮತ್ತು 7 ಮೀಸಲಾತಿ ಒಳಗೆ ಆಗಬೇಕು.ಇಲ್ಲದೆ ಹೋದರೆ ನಿಮ್ಮನ್ನು ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲವೆಂದು ಸಿಎಂಗೆ ಎಚ್ಚರಿಕೆ ನೀಡಿದರು.ಸಿದ್ದರಾಮಯ್ಯ ಕಪಟ ನಾಟಕಧಾರಿಗಳು,ವಿಶ್ವಾಸ ದ್ರೋಹಿಗಳು ನಿಮ್ಮನ್ನು ಜನ ನಂಬಲು ಸಾಧ್ಯವಿಲ್ಲ.ಸರ್ಕಾರ ದಿವಾಳಿಯಾಗಿದ್ದು, ನೇಮಕಾತಿಗಳನ್ನು ಮುಂದೂಡುವ ತಂತ್ರವಾಗಿದೆ.

ಪೌರ ಕಾರ್ಮಿಕರು ಕೆಲಸ ನಿಲ್ಲಿಸಿದರೆ ನೀವು ವಿಧಾನ ಸೌಧದಲ್ಲಿ ಕೂರಲು ಸಾಧ್ಯವಿಲ್ಲವೆಂದು ಎಚ್ಚರಿಸಿದರು.ಸಿದ್ದರಾಮಯ್ಯ ಉಪಜಾತಿಗಳ ನಡುವೆ ವಿಷ ಬೀಜ ಬಿತ್ತಿ ಲಾಭ ಪಡೆದಿದ್ದು ಬಿಟ್ಟರೆ, ಬೇರೆನು ಸಾಧನೆ ಮಾಡಲಿಲ್ಲ.ಮಾದಿಗರ ಮಹಾಸಭಾ ಎಂದು ಕಟ್ಟಿಕೊಂಡಿರುವ ಮಾದಿಗ ನಾಯಕ ಕೆಹೆಚ್ ಮುನಿಯಪ್ಪನಿಗೆ ಗೌರವವಿದ್ದರೆ, ಮಾದಿಗರ ಮೇಲೆ ಮಾದಿಗರ ಮತ್ತು ಇನ್ನುಳಿದ ದಲಿತ ಸಮುದಾಯಗಳ ಬಬಗ್ಗೆ ಕಾಳಜಿ ಇದ್ದರೆ, ಐದು ನಿಮಿಷ ಕ್ಯಾಬಿನೆಟದ ನಲ್ಲಿದೆ.

ರಾಜೀನಾಮೆ ಕೊಟ್ಟು ಹೊರಗೆ ಬರಬೇಕು.ಸಚಿವ ತಿಮ್ಮಾಪುರ್ ಮಾನ ಮಾರ್ಯಾದೆ ಇದ್ದರೆ ಕೂಡ ರಾಜೀನಾಮೆ ಕೊಡಬೇಕೆಂದರು.ನಿಮ್ಮ ಲಾಭ ಮತ್ತು ಕುಟುಂಬದ ರಕ್ಷಣೆ ಗಾಗಿ ಕ್ಯಾಬಿನೆಟ್ ನಲ್ಲಿರುವುದಲ್ಲ.ಸಮಾಜದ ಪ್ರತಿನಿಧಿಯಾಗಿ ನಿಮ್ಮ ಕರ್ತವ್ಯ ನಿಭಾಯಿಸಬೇಕು. ನಿಭಾಯಿಸದೆ ಹೋದರೆ ನೀವು ಸಮಾಜದ ದ್ರೋಹಿಗಳಾಗುತ್ತೀರೆಂದು ಕಿಡಿ ಕಾರಿದರು.

0 Shares

By admin

Leave a Reply

Your email address will not be published. Required fields are marked *