0 Shares

ಬೆಂಗಳೂರು : ಕೇಂದ್ರದಿಂದ ಸರಿಯಾದ ಸಮಯಕ್ಕೆ ಅನುದಾನ (NHM) ಬರದಿದ್ದರೂ ಆರೋಗ್ಯ ಇಲಾಖೆ ಎಲ್ಲ ಯೋಜನೆಗಳಿಗೂ ಹಣ ನೀಡುತ್ತಿದೆ. ಇಲಾಖೆಗೆ ಪಾರಲಿಸಿಸ್ ಅಗಿಲ್ಲ ಅರೋಗ್ಯದಿಂದ ಇದೆ. ವಿಧಾನಸೌಧದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಕೃಶ್ನಾ ಡೈಗ್ನೋಸ್ಟಿಕ್ಸ್ ಕಂಪನಿ ವತಿಯಿಂದ ನಡೆಯುತ್ತಿದ್ದ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗ ಳು ಸ್ಥಗಿತ ವಿಚಾರದಲ್ಲಿ ವಿರೋಧ ಪಕ್ಷ ಸತ್ಯಕ್ಕೆ ದೂರವಾದ ವಿಚಾರ ಮಾತನಾಡಿದೆ.

ದುಡ್ಡು ಕೊಟ್ಟಿಲ್ಲಾ ಎಂದು ಕಂಪನಿ ಪತ್ರ ಬರೆದಿದ್ದಕ್ಕೆ, ವಿಪಕ್ಷಗಳು ಇದನ್ನ ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಸರ್ಕಾರಕ್ಕೆ ಹಣಕಾಸಿನ ಕೊರತೆ ಇದೆ, ಇಲಾಖೆಗೆ ಪಾರಲಿಸಿಸ್ ಆಗಿದೆ ಹೀಗೆ ಏನೇನೋ ಹೆಳುತ್ತಿದ್ದಾರೆ. ಅವರು ಟೀಕೆ ಮಾಡುತ್ತಿದ್ದಾರೆ ಎಂದು ನಾನು ಟೀಕೆ ಮಾಡುವುದಿಲ್ಲ. ಕೆಲಸ ಮಾಡುವುದು ನಮ್ಮ ಕರ್ತವ್ಯ. ಜನರಿಗೆ ಸಮಸ್ಯೆ ಆಗಬಾರದು ಎಂಬುದು ನಮ್ಮ ಉದ್ದೇಶ.
ಖಾಸಗಿ ಕಂಪನಿ ಬರೆದ ಪತ್ರಕ್ಕೆ ಇವರ ರಿಯಾಕ್ಷನ್ ನೋಡಿದರೆ ಏನನ್ನಬೇಕು ಅರ್ಥವಾಗುವುದಿಲ್ಲ.

ಮೊದಲು ಇದಕ್ಕೊಂದು ವ್ಯವಸ್ಥೆಯೇ ಇರಲಿಲ್ಲ. ಕಂಪನಿಯವರು ಹೇಳಿದ್ದೇ ಲೆಕ್ಕ. ಯಾವಾಗ ಇದಕ್ಕೊಂದು ವ್ಯವಸ್ಥೆ, ನಿಯಮವನ್ನು ತಂದ ನಂತರ ಸ್ಕ್ಯಾನಿಂಗ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂತು. ಇದಾವುದನ್ನು ತಿಳಿಯದೇ ವಿರೋಧ ಪಕ್ಷ ಕಂಪನಿಯ ಪರವಾಗಿ ಮಾತನಾಡುತ್ತಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗಿದೆ ಎಂಬುದನ್ನು ಅವರು ಅರ್ಥೈಸಿಕೊಂಡಿಲ್ಲ.

ಕಂಪನಿಯವರು ಏನೆ ಹೇಳಲಿ. ನಮ್ಮ ಉದ್ದೇಶ ಜನರಿಗೆ ಸಮಸ್ಯೆ ಆಗಬಾರದು. ಸರ್ಕಾರದ ಹಣ ದುರುಪಯೋಗ ಆಗಲು ಅವಕಾಶ 2019 ರಿಂದ ಹಿಂಬಾಕಿ ಹಣ 143 ಕೋಟಿ ರೂ. ಕೊಡಿ ಎಂದು ಕಂಪನಿಯವರು ಕೇಳಿದ್ದಾರೆ. ನಾವು ಅಷ್ಟು ಕೊಡೊಕೆ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೇವೆ.

2019 ರಿಂದ ಪ್ರತಿ ವರ್ಷ ಶೇ 5 ಹೆಚ್ಚುವರಿ ನೀಡಬೇಕು ಎಂದು ಅವರು ಹೇಳಿದ್ದಾರೆ. ಅದನ್ನು ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ರಾಜ್ಯದ 13 ಆಸ್ಪತ್ರೆಗಳಲ್ಲಿ ಮಾತ್ರ ಇದರಿಂದ ಸಮಸ್ಯೆ ಆಗಿದೆ. ಹೆಚ್ಚಿನ ಆಸ್ಪತ್ರೆಗಳಿಗೆ ನಾವು ಪರ್ಯಾಯ ವ್ಯವಸ್ಥೆ ತಕ್ಷಣ ಮಾಡಿದ್ದೇವೆ. ಉಳಿದ ಆಸ್ಪತ್ರೆಗಳಲ್ಲಿ ನಾಳೆ ಹೊತ್ತಿಗೆ ಪರ್ಯಾಯ ವ್ಯವಸ್ಥೆ ಆಗುತ್ತದೆ. ಇನ್ನು ಮುಂದೆ ಈ ಕಂಪನಿ ಜೊತೆ ಒಡಂಬಡಿಕೆ ಆದರೂ ಸ್ಥಳೀಯ ಮಟ್ಟದ ಆಸ್ಪತ್ರೆಗಳ ಜೊತೆಗೂ ಸಹಭಾಗಿತ್ವ ಮುಂದುವರಿಯಲಿದೆ.

ಹಳೆಯ ಸ್ಕ್ಯಾನ್ ಗಳ ದೃಢೀಕರಣ ಮಾಡಿದರೆ ಮಾತ್ರ ನಾವು ದುಡ್ಡು ಕೊಡುತ್ತೇವೆ ಎಂದು ಹೇಳಿದ್ದೇವೆ. ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಗಳು ಹಾಗೂ ಮೂರು ಸಿಟಿ ಸ್ಕ್ಯಾನ್ ಗಳಿಗೆ ಟೆಂಡರ್ ಕರೆಯಲಾಗಿದೆ. ಇಲಾಖೆ ವತಿಯಿಂದ ಸದ್ಯದಲ್ಲೇ ಯಂತ್ರ ಪೂರೈಕೆ ಮಾಡುತ್ತೇವೆ. ಇದನ್ನು ವಿರೋಧ ಪಕ್ಷದವರು ಬೇರೆ ತರ ಬಿಂಬಿಸುವುದಕ್ಕೆ ಪ್ರಯತ್ನಿಸಿದರು. ಇದಕ್ಕೊಂದು ನಿಯಮ ಮಾಡಿದ್ದರಿಂದ ಕಳೆದ ಒಂದುವರೆ ವರ್ಷದಲ್ಲಿ ಸುಮಾರು 200 ಕೋಟಿ ಹಣವನ್ನು ಎಮ್ ಆರ್ ಐ , ಸಿಟಿ ಸ್ಕ್ಯಾನ್ ಗಳಲ್ಲಿ ಉಳಿಸಿದ್ದೇನೆ. ಸರ್ಕಾರದ ಹಣ ಉಳಿಸಿದ್ದಕ್ಕೆ ವಿರೋಧ ಪಕ್ಷದವರು ಥ್ಯಾಂಕ್ಸ್ ಹೇಳಬೇಕು. ವೃಥಾ ಟೀಕೆ ಮಾಡಬಾರದು.

ನಾಳೆ ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಸುಮಾರು 1200 ಜನರಿಗೆ ನೇಮಕಾತಿ ಪತ್ರ ನೀಡಲಿದ್ದೇವೆ. 970a ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ನೇಮಕಾತಿ ಪತ್ರ ನೀಡಲಿದ್ದೇವೆ. ಫಾರ್ಮಾಸಿಸ್ಟ್ ವಿದ್ಯಾರ್ಥಿಗಳಿಗೆ ಒಂದು ವರ್ಷದ ಇಂಟರ್ನಶಿಪ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೇವೆ. ನಮ್ಮ ಆಸ್ಪತ್ರೆಗಳಲ್ಲಿ ಅವರು ಕೆಲಸ ನಿರ್ವಹಿಸಲಿದ್ದಾರೆ. 223 ಡಿ ಫಾರ್ಮಾ ಓದುತ್ತಿರುವವರು ಇಂಟರ್ನಶಿಪ್ ಗೆ ಆಯ್ಕೆ ಮಾಡಲಾಗಿದೆ. 77 ಡ್ರಗ್ ಇನ್ಸಪೆಕ್ಟರ್ ಗಳ ನೇಮಕಾತಿ ಮಾಡಿದ್ದೇವೆ.

0 Shares

By admin

Leave a Reply

Your email address will not be published. Required fields are marked *