ಬೆಳಗಾವಿ : ಬೆಳಗಾವಿ ಪೆಟ್ರೋಲ್ ಅಭಾವದಿಂದ ಬಂಕ್ ಮುಂದೆ ಸಾಲುಗಟ್ಟಿ ನಿಂತ ವಾಹನಗಳಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗಿ ಕಾಲೇಜು ಯುವಕರ ಜೊತೆಗೆ ಆಂಕಲ್ ಓರ್ವ ಮಾರಾಮಾರಿ ನಡೆಸಿದ ಘಟನೆ ಮಂಗಳವಾರ ನಗರದ ರಾಮದೇವ ಹೋಟೆಲ್ ಬಳಿ ನಡೆದಿದೆ.
ಕಳೆದ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ನಗರದಲ್ಲಿಯೂ ಪೆಟ್ರೋಲ್ ಸಿಗುವದಿಲ್ಲ ಎಂದು ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ಗಳ ಮುಂದೆ ವಾಹನ ಸರದಿ ಸಾಲಿನಲ್ಲಿ ನಿಂತಿದ್ದ, ಪರಿಣಾಮ ಇಂದು ಸಹ ರಾಮದೇವ ಹೋಟೆಲ್ ಪಕ್ಕದಲ್ಲಿರುವ ಸೇಲ್ ಪೆಟ್ರೋಲ್ ಬಂಕ್ ಬಳಿ ವಾಹನ ಸಾಲು ಕಟ್ಟಿ ನಿಂತಾಗ ಆಂಕಲ್ ಗಾಡಿಗೆ ಕಾಲೇಜು ಯುವಕರ ವಾಹನ ಟಚ್ ಆದ ಹಿನ್ನೆಲೆಯಲ್ಲಿ ಆಂಕಲ್, ಯುವಕರ ನಡುವೆ ಮಾರಾಮಾರಿ ನಡೆದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
