ಪ್ರಿಯಾಂಕ ಖರ್ಗೆ ಅವರು ಎಲ್ಲ ಒಟ್ಟಿಗೆ ಸೇರಿ ಸೆಟಲ್ ಮಾಡಿಕೊಳ್ಳಿ ಅಂತಾ ಹೇಳಿದ್ದಾರೆ. ಯಾರಿಗೂ ಅನ್ಯಾಯ ಆಗುವುದು ಬೇಡ. ನಾನು ಕೂಡ ಹೇಳುತ್ತೇನೆ ಅಂದಿದ್ದಾರೆ. ಎಲ್ಲರೂ ಒಟ್ಟಾಗಿ ಇರಬೇಕು, ಸಮನಾಗಿ ಹಂಚಬೇಕೆಂದು ಖರ್ಗೆ ಭೇಟಿ ಬಳಿಕ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ನಾವು ಅದಕ್ಕೆ ಸಮ್ಮತಿ ನೀಡಿದ್ದೇವೆ. ಪರಮೇಶ್ವರ್ ಮಹದೇವಪ್ಪ ಗಮನಕ್ಕೆ ತರುತ್ತೇವೆ. 101 ಜಾತಿಗೆ ಯಾವುದೇ ಅನ್ಯಾಯ ಆಗಬಾರದು. ಇದು ನಮ್ಮ ಮೊದಲಿನಿಂದ ನಿಲುವು, ಸೆಟಲ್ ಮಾಡಿಕೊಳ್ಳಲು ನಾವು ರೆಡಿ ತಯಾರಿದ್ದೇವೆ.
ನಾಳೆ ಕ್ಯಾಬಿನೆಟ್ ನಲ್ಲಿ ಕುಳಿತು ಮಾತನಾಡಿಕೊಳ್ಳುತ್ತೇವೆ, ಸಮನಾಗಿ ಹಂಚಿಕೊಳ್ಳುತ್ತೇವೆ, ನಾವು ಎಜಿ ಭೇಟಿಮಾಡಿದ್ದೇವು, ಯಾವುದೇ ಕೋರ್ಟ್ನಲ್ಲಿ ಸ್ಟೇ ಇಲ್ಲ, ಒಳ ಮೀಸಲಾತಿ ಮಾಡಲು ಯಾವುದೇ ಅಭ್ಯಂತರ ಇಲ್ಲ ಎಂದರು.
